ಕುವೆಂಪು ವಿಶ್ವವಿದ್ಯಾಲಯದ 1987ರಲ್ಲಿ ಅಸ್ತಿತ್ವಕ್ಕೆ ಬಂದ ಕುವೆಂಪು ವಿಶ್ವವಿದ್ಯಾಲಯವು ಸಂಯೋಜನೆ ನೀಡುವ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ದಿಂದ 2(f) ಮತ್ತು 12(b) ಅಡಿಯಲ್ಲಿ ಮನ್ನಣೆಯನ್ನು ಪಡೆದಿದೆ. ಈ ವಿಶ್ವವಿದ್ಯಾಲಯವು ಕನ್ನಡದ ಶ್ರೇಷ್ಠ ಬರಹಗಾರರಾದ ಶ್ರೀ ಕುವೆಂಪು ಅವರ ಹೆಸರನ್ನು ಹೊತ್ತಿದೆ. ಅದು ತನ್ನದೇ ಆದ ವಿಶಿಷ್ಟ ಶೈಕ್ಷಣಿಕ ವ್ಯಕ್ತಿತ್ವ ಹಾಗೂ ಸಾಂಸ್ಕೃತಿಕ ಗುರುತನ್ನು ಪಡೆದುಕೊಂಡಿದೆ. ಕನ್ನಡದ ಮೇರು ಬರಹಗಾರರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಆಧುನಿಕ ಭಾರತದ ಅತ್ಯಂತ ಮಹತ್ವಪೂರ್ಣ ಸಾಂಸ್ಕೃತಿಕ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಶ್ರೀ ಕುವೆಂಪು ಅವರ ಬಹುಮುಖಿ ವ್ಯಕ್ತಿತ್ವದಿಂದ ವಿಶ್ವವಿದ್ಯಾಲಯವು ತನ್ನ ಅನನ್ಯ ವ್ಯಕ್ತಿತ್ವದ ಚಹರೆಗಳನ್ನು ಪಡೆದುಕೊಂಡಿದೆ. |
|
ಕುವೆಂಪು ವಿಶ್ವವಿದ್ಯಾಲಯವು ಸ್ಥಳೀಯ ಹಾಗೂ ವಿಶ್ವಾತ್ಮಕ, ಪ್ರಾಂತೀಯ ಹಾಗೂ ಅಖಿಲ ಭಾರತೀಯ ಸತ್ವಗಳ ಸಂಗಮವಾಗಿದ್ದು ಸಂಪ್ರದಾಯಗಳಿಂದ ಪೋಷಣೆಯನ್ನು ಪಡೆದು ಆಧುನಿಕತೆಯ ಚಲನಶೀಲತೆಯನ್ನು ಮೈಗೂಡಿಸಿಕೊಂಡಿದೆ. ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸೌಲಭ್ಯವಂಚಿತರಾಗಿರುವವರ ಬಗ್ಗೆ ಆಳವಾದ ಬದ್ಧತೆಯನ್ನು ಹೊಂದಿದೆ; ಅದೇ ಹೊತ್ತಿಗೆ ಶ್ರೇಷ್ಠತೆಯ ಬಗ್ಗೆ ಕಾಳಜಿಯನ್ನು ಹೊಂದಿದೆ. |
ವಿಶ್ವವಿದ್ಯಾಲಯದ ಲಾಂಛನವು ಆನೆಯ ಸೊಂಡಿಲು ಹಾಗೂ ಹಂಸದ ಶರೀರವನ್ನು ಹೊಂದಿರುವ ಪೌರಾಣಿಕ ಪ್ರಾಣಿಯ ಸಂಕೇತವಾಗಿದೆ. ಇದನ್ನು ‘ಗಜಹಂಸ’ವೆಂದು ಕರೆಯಲಾಗಿದ್ದು, ಅದು ವಿಜಯನಗರ ಹಾಗೂ ಕೆಳದಿ ಶಿಲ್ಪ ಮತ್ತು ದೇವಾಲಯ ಕಲೆಯಲ್ಲಿ ಕಂಡುಬರುತ್ತದೆ. ಅದು ಜ್ಞಾನ ಹಾಗೂ ಸಂಪತ್ತಿನ ಸಂಶ್ಲೇಷಣೆಯನ್ನು ಸಂಕೇತಿಸುತ್ತದೆ.
ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಯು (Jurisdiction) ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿದೆ. ಕುವೆಂಪು ವಿಶ್ವವಿದ್ಯಾಲಯವು ವಿಶಿಷ್ಟವಾದ ಶೈಕ್ಷಣಿಕ ವ್ಯಕ್ತಿತ್ವವನ್ನು ಹೊಂದಿದ್ದು ಗ್ರಾಮೀಣ ಪರಿಸರದೊಂದಿಗೆ ಆಧುನಿಕ ಪ್ರಜ್ಞೆಯನ್ನು ಮೇಳವಿಸಿಕೊಂಡಿದೆ. ವಿವಿಧ ಜ್ಞಾನಶಿಸ್ತುಗಳಲ್ಲಿ ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಎಚ್ಡಿ.Course ಗಳನ್ನು ಅದು ನೀಡುತ್ತದೆ. ಕಲಾ, ವಾಣಿಜ್ಯ, ಶಿಕ್ಷಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯಗಳಿಗೆ ಸೇರಿದ 35 ಸ್ನಾತಕೋತ್ತರ ವಿಭಾಗಗಳನ್ನು ಹೊಂದಿದೆ. |
ಜ್ಞಾನ ಸಹ್ಯಾದ್ರಿ ಆವರಣದಲ್ಲಿ ವಿಶ್ವವಿದ್ಯಾಲಯದ ಆಡಳಿತ ಕೇಂದ್ರವಿದೆ. ಉನ್ನತ ಶಿಕ್ಷಣಕ್ಕೆ ಸಮರ್ಪಕವಾದ ವಾತಾವರಣವನ್ನು ಒದಗಿಸುವ 230 ಎಕರೆ ವಿಸ್ತೀರ್ಣ ಹೊಂದಿರುವ, ಕಂಗೊಳಿಸುವ ಹಸಿರಾದ ಕಣ್ಸೆಳೆಯುವ ಆವರಣವು ಇದಾಗಿದೆ. ಇಲ್ಲಿಯ ಭೂವಿನ್ಯಾಸದೊಂದಿಗೆ ಸಹಜವಾಗಿ ಹೊಂದಿಕೊಳ್ಳುವ ರೀತಿಯಲ್ಲಿ ಅಲ್ಲಲ್ಲಿ ಹರಡಿಕೊಂಡಿರುವ ಏರುದಿನ್ನೆಗಳ ಮೇಲೆ, ಗುಡ್ಡಗಳ ಮೇಲೆ ಮುಖ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇಡೀ ಆವರಣವು ಎಲ್ಲಾ ಬಗೆಯ ಮಾಲಿನ್ಯಗಳಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ಉನ್ನತ ಶಿಕ್ಷಣ ಹಾಗೂ ಸಂಶೋಧನೆಗೆ ಅವಶ್ಯಕವಾದ ಪ್ರಶಾಂತವಾದ ಹಾಗೂ ಆಹ್ಲಾದಕರವಾದ ವಾತಾವರಣವು ಇಲ್ಲಿದೆ. |
ಸ್ನಾತಕೋತ್ತರ ಕೇಂದ್ರ, ಕಡೂರು: ಗ್ರಾಮೀಣ ಭಾಗದ ಯುವ ಜನರಿಗೆ ಉನ್ನತ ಶಿಕ್ಷಣದ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಕಡೂರಿನ ಬಸವನಗರದಲ್ಲಿ ಕುವೆಂಪು ವಿಶ್ವವಿದ್ಯಾಲಯವು ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದೆ. ಕೇಂದ್ರದ 65 ಎಕರೆ ವಿಸ್ತೀರ್ಣದ ಆವರಣವು ಕಡೂರು ಪಟ್ಟಣದಿಂದ 7 ಕಿ.ಮೀ. ದೂರದಲ್ಲಿದ್ದು ಶಿವಮೊಗ್ಗ-ಬೆಂಗಳೂರು ಹೆದ್ದಾರಿಗೆ ಸಮೀಪದಲ್ಲಿದೆ. ಎಂ.ಕಾಂ., ಎಂ.ಎ. ಅರ್ಥಶಾಸ್ತ್ರ, ಎಂ.ಎಸ್ಸಿ. ರಸಾಯನಶಾಸ್ತ್ರ ಹಾಗೂ ಎಂ.ಎಸ್ಸಿ. ಔಷಧೀಯ ರಸಾಯನ ಶಾಸ್ತ್ರ (Pharmaceutical Chemistry) ಸ್ನಾತಕೋತ್ತರ ಕೋರ್ಸುಗಳನ್ನು ಇಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ವಸತಿ ನಿಲಯಗಳಿವೆ. |
ಸ್ನಾತಕೋತ್ತರ ಕೇಂದ್ರ, ಚಿಕ್ಕಮಗಳೂರು: ‘ಎಲ್ಲರಿಗೂ ಶಿಕ್ಷಣ’ ಎನ್ನುವ ತನ್ನ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಮತ್ತು ಗ್ರಾಮೀಣ ಯುವಜನರಿಗೆ ಉನ್ನತ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ಚಿಕ್ಕಮಗಳೂರಿನಲ್ಲಿ ಇನ್ನೊಂದು ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದೆ. ಎಂ.ಕಾಂ., ಎಂ.ಎ. ಕನ್ನಡ, ಎಂ.ಎ. ರಾಜ್ಯಶಾಸ್ತ್ರ ಹಾಗೂ ಎಂ.ಎ. ಗಣಿತ ವಿಜ್ಞಾನ ಕೋರ್ಸುಗಳನ್ನು ಈ ಕೇಂದ್ರದಲ್ಲಿ ಬೋಧಿಸಲಾಗುತ್ತಿದೆ. |
ಸಂಯೋಜಿತ ಕಾಲೇಜುಗಳು: ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಯಲ್ಲಿ ಸಂಯೋಜನೆ ಪಡೆದಿರುವ 99 ಕಾಲೇಜುಗಳಿವೆ. ಇವುಗಳಲ್ಲಿ 3 ಘಟಕ ಕಾಲೇಜುಗಳು, 30 ಸರಕಾರಿ ಕಾಲೇಜುಗಳು ಹಾಗೂ 65 ಖಾಸಗಿ ಕಾಲೇಜುಗಳು ಮತ್ತು ಒಂದು ವಿಶ್ವವಿದ್ಯಾಲಯದ ನೇರ ಆಡಳಿತಕ್ಕೆ ಒಳಪಟ್ಟ ಕಾಲೇಜು ಸೇರಿವೆ. ಅವುಗಳಲ್ಲಿ 18 ಕಾಲೇಜುಗಳು B.Ed. ಕೋರ್ಸನ್ನು ಬೋಧಿಸುತ್ತವೆ. 35 ಕಾಲೇಜುಗಳು NAAC ನಿಂದ ಮೌಲ್ಯಾಂಕನವನ್ನು ಪಡೆದಿವೆ. 47 ಕಾಲೇಜುಗಳು ಯು.ಜಿ.ಸಿ.ಯ 2(f) ಹಾಗೂ 12(b) ಅಡಿಯಲ್ಲಿ ಮಾನ್ಯತೆ ಪಡೆದಿವೆ. |
ಘಟಕ ಕಾಲೇಜುಗಳು: ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ವಾಣಿಜ್ಯ ಕಾಲೇಜು ಹಾಗೂ ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ) ಇವುಗಳು ಹಿಂದೆ ಸರಕಾರಿ ಸಂಸ್ಥೆಗಳಾಗಿದ್ದು ಈಗ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿವೆ. ಈ ಕಾಲೇಜುಗಳು ಹಳೆಯ ವಿದ್ಯಾರ್ಥಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಹಲವಾರು ಗಣ್ಯರಿದ್ದಾರೆ. ಡಾ. ಯು.ಆರ್. ಅನಂತಮೂರ್ತಿ (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು), ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ (ಭಾರತರತ್ನ ಪುರಸ್ಕೃತರು), ಶ್ರೀ ಕೆ.ವಿ. ಸುಬ್ಬಣ್ಣ (ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು), ಶ್ರೀ ಡಿ.ಎಚ್. ಶಂಕರಮೂರ್ತಿ (ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸ್ಪೀಕರ್ ಮತ್ತು ಮಾಜಿ ಶಿಕ್ಷಣ ಸಚಿವರು, ಕರ್ನಾಟಕ ರಾಜ್ಯ) ಮುಂತಾದವರು ಇವರಲ್ಲಿ ಸೇರಿದ್ದಾರೆ. ಯು.ಜಿ.ಸಿ. ಯಿಂದ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳು “College with Potential for Excellence” ಮನ್ನಣೆ ಪಡೆದಿವೆ. ಈ ಕಾಲೇಜುಗಳು ವಜ್ರಮಹೋತ್ಸವವನ್ನು ಆಚರಿಸಿವೆ. |
ದೂರ ಶಿಕ್ಷಣ ನಿರ್ದೇಶನಾಲಯ: ವಿಶ್ವವಿದ್ಯಾಲಯ ಹಾಗೂ ಸಮಾಜಗಳ ಸಂಬಂಧವನ್ನು ಪೋಷಿಸುವ ಹಾಗೂ ‘ಎಲ್ಲರಿಗೂ ಶಿಕ್ಷಣ’ ವೆನ್ನುವ ತನ್ನ ಧ್ಯೇಯವನ್ನು ಸಾಧಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ದೂರ ಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸಿದ್ದು ಇದರ ಮೂಲಕ ಅನೇಕ ವಿಷಯಗಳಲ್ಲಿ ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಜಿ. ಡಿಪ್ಲೋಮಾ ಕೋರ್ಸುಗಳನ್ನು ನೀಡಲಾಗುತ್ತಿದೆ. ಉನ್ನತ ಶಿಕ್ಷಣವನ್ನು ಪಡೆಯಬಯಸುವವರ ಮನೆಯ ಹೊಸ್ತಿಲಿಗೆ ಗುಣಮಟ್ಟದ ಶಿಕ್ಷಣವನ್ನು ಕೊಂಡೊಯ್ಯುವ ಉದ್ದೇಶವನ್ನು ನಿರ್ದೇಶನಾಲಯವು ಕಾರ್ಯರೂಪಕ್ಕೆ ತರುತ್ತಿದೆ. |
ಕೆಳದಿ ವಸ್ತು ಸಂಗ್ರಹಾಲಯ: ವಿಭಿನ್ನ ಹಸ್ತಪ್ರತಿಗಳು, ಶಿಲ್ಪಗಳು ಹಾಗೂ ವರ್ಣಚಿತ್ರಗಳೊಂದಿಗೆ ತನ್ನದೇ ಆದ ಪ್ರಕಾಶನ ವಿಭಾಗವನ್ನು ಹೊಂದಿರುವ ಈ ವಸ್ತುಸಂಗ್ರಹಾಲಯವು ವಿಶಿಷ್ಟವಾಗಿದೆ. ಇಲ್ಲಿ 2500 ತಾಳೆಗರಿ ಹಸ್ತಪ್ರತಿಗಳು, ಕನ್ನಡ, ಸಂಸ್ಕೃತ ಮತ್ತು ತೆಲುಗು ಲಿಪಿಗಳಲ್ಲಿರುವ ಸಾವಿರಾರು ಕಾಗದದ ಹಸ್ತಪ್ರತಿಗಳು ಮತ್ತು ತಿಗಳಾರಿ ಲಿಪಿಗಳಲ್ಲಿರುವ 400 ತಾಳೆಗರಿ ಹಸ್ತಪ್ರತಿಗಳಿವೆ. ಸಂಶೋಧಕರಿಗೆ ಇಲ್ಲಿ ಸಂಶೋಧನೆಗೆ ಅನುಕೂಲಗಳನ್ನು ಕಲ್ಪಿಸಲಾಗಿದೆ. |
ಪ್ರಸಾರಾಂಗ: ವಿಶ್ವವಿದ್ಯಾಲಯದ ಪ್ರಕಾಶನಾ ಅಂಗವಾದ ಪ್ರಸಾರಾಂಗವು ಜ್ಞಾನದ ಪ್ರಸರಣ ಹಾಗೂ ಹೊರಗಣ ಸಮಾಜದ ಜೊತೆಗೆ ಅರಿವಿನ ಸೇತುವೆಗಳನ್ನು ಕಟ್ಟುವ ಅರ್ಥಪೂರ್ಣ ಕೆಲಸವನ್ನು ನಿರ್ವಹಿಸುತ್ತಿದೆ. ಪ್ರಧಾನವಾಗಿ ಪ್ರಸಾರಾಂಗವು ವಿಸ್ತರಣಾ ಉಪನ್ಯಾಸಗಳು, ಪುಸ್ತಕ ಪ್ರಕಟಣೆ ಹಾಗೂ ವಿಶ್ವವಿದ್ಯಾಲಯದ ಮಾಹಿತಿಪತ್ರ ಮತ್ತು ವಿದ್ವತ್ ಪತ್ರಿಕೆಗಳನ್ನು ಪ್ರಕಟಿಸುವ ಕೆಲಸಗಳನ್ನು ನಿರ್ವಹಿಸುತ್ತದೆ. |
ವಿದ್ಯಾರ್ಥಿಗಳಿಗೆ ಸೌಲಭ್ಯಗಳು |
|
ಗ್ರಂಥಾಲಯ:
ವಿಶ್ವವಿದ್ಯಾಲಯದ ಗ್ರಂಥಾಲಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಂಶೋಧಕರಿಗೆ ಗ್ರಂಥಗಳನ್ನು ಓದಲು, ಎರವಲು ಪಡೆಯಲು ಹಾಗೂ ಪರಾಮರ್ಶೆ ಮಾಡಲು ಎಲ್ಲಾ ಅನುಕೂಲಗಳಿರುವ ಆಧುನಿಕ ಹಾಗೂ ವ್ಯವಸ್ಥಿತವಾದ ಕಟ್ಟಡದಲ್ಲಿದೆ. ನವೀನ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಂಥಾಲಯವು ನಿರಂತರವಾಗಿ ಆಧುನೀಕರಣಗೊಂಡಿದೆ. ಇಲ್ಲಿ ಅವಶ್ಯಕವಾದ ಗ್ರಂಥಗಳು, ಪರಾಮರ್ಶನ ಸಾಮಗ್ರಿಗಳು, ಪತ್ರಿಕೆಗಳು, ವಿದ್ವತ್ ಪತ್ರಿಕೆಗಳು, ವರದಿಗಳು, ಸಂಶೋಧನಾ ಪ್ರಬಂಧಗಳ ಪ್ರತಿಗಳು ಮುಂತಾದ ಸಾಂಪ್ರದಾಯಿಕ ಆಕರಗಳು ಲಭ್ಯವಿವೆ. ಅಲ್ಲದೆ e-ಪತ್ರಿಕೆಗಳು, e-ಮಾಹಿತಿ ಆಕರಗಳು, e-portalಗಳು ಮುಂತಾದ ಸೌಲಭ್ಯಗಳೂ ಲಭ್ಯವಿವೆ. UGC-Inflibnet Centreನ ಸಹಯೋಗದೊಂದಿಗೆ ಗ್ರಂಥಾಲಯದಲ್ಲಿ 15,000
e-ಆಕರಗಳನ್ನು ಶೋಧಸಿಂಧು ಯೋಜನೆಯ ಅಡಿಯಲ್ಲಿ ಬಳಕೆಗೆ ಲಭ್ಯಗೊಳಿಸಲಾಗಿದೆ. ಅಲ್ಲದೆ ದೈನಂದಿನ ಕೆಲಸದ ಅವಧಿಯ ನಂತರವೂ ಗ್ರಂಥಾಲಯದ ಸೌಲಭ್ಯಗಳನ್ನು ಬಳಸಲು ಅತ್ಯುತ್ತಮ ವ್ಯವಸ್ಥೆಯನ್ನು ಮಾಡಲಾಗಿದೆ.
|
ಹಸಿರು ಗ್ರಂಥಾಲಯ (Green Library): ವಿಶ್ವವಿದ್ಯಾಲಯದ ಪ್ರಶಾಂತ ಹಾಗೂ ಆಹ್ಲಾದಕರವಾದ ಆವರಣದಲ್ಲಿ ಮರಗಿಡಗಳ ನೆರಳಿನಲ್ಲಿ ಗ್ರಂಥಗಳನ್ನು, ಪತ್ರಿಕೆಗಳನ್ನು ವಿದ್ಯಾರ್ಥಿಗಳು ಓದಲು ಅನುಕೂಲವಾಗುವಂತೆ Wi-Fi ಸೌಲಭ್ಯವನ್ನು ಬಳಸಿಕೊಂಡು ಹಸಿರು ಗ್ರಂಥಾಲಯವನ್ನು ವ್ಯವಸ್ಥೆ ಮಾಡಲಾಗಿದೆ. |
ವಸತಿನಿಲಯಗಳು: ಎರಡು ಮಹಿಳೆಯರ ವಸತಿನಿಲಯಗಳು, ಎರಡು ಪುರುಷರ ವಸತಿನಿಲಯಗಳು ಮುಖ್ಯ ಆವರಣದಲ್ಲಿವೆ. ಅಲ್ಲದೆ ವಿದ್ಯಾರ್ಥಿನಿಯರಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವಿರುವ ಉದ್ಯೋಗಸ್ಥ ಮಹಿಳೆಯರ ವಸತಿನಿಲಯವೂ ಇದೆ. |
ವಿಶ್ವವಿದ್ಯಾಲಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಮಾತ್ರ ಲಭ್ಯವಿರುವ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ವಸತಿನಿಲಯವನ್ನು ಕರ್ನಾಟಕ ಸರಕಾರವು ವಿಶ್ವವಿದ್ಯಾಲಯದ ಅವರಣದ ಸನಿಹದಲ್ಲಿಯೇ ಸ್ಥಾಪಿಸಿದೆ. ಕಡೂರು ಸ್ನಾತಕೋತ್ತರ ಕೇಂದ್ರದಲ್ಲಿಯೂ ಎರಡು ವಿದ್ಯಾರ್ಥಿ ವಸತಿನಿಲಯಗಳಿವೆ. |
Add-on P. G Diploma Courses: Encouraged by the guidelines of University Grants Commission, the university Departments and the Directorate of Distance Education provide an opportunity for the post- graduate students to study and obtain a Post-Graduate Diploma simultaneously with the Post-Graduate course being pursued by them. |
ಭಾಷಾ ಪ್ರಯೋಗಾಲಯ:
ವಿದ್ಯಾರ್ಥಿಗಳಿಗೆ ಸಂವಹನಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಕಲಿಸಿಕೊಡುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಬೋಧನಾ ವ್ಯವಸ್ಥೆಯುಳ್ಳ ಭಾಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಇದನ್ನು ಇಂಗ್ಲಿಷ್ ಸ್ನಾತಕೋತ್ತರ ವಿಭಾಗದ ನಿರ್ವಹಣೆಯಲ್ಲಿ ವಿಶ್ವವಿದ್ಯಾಲಯದ ಎಲ್ಲಾ ವಿಷಯಗಳ ವಿದ್ಯಾರ್ಥಿಗಳಿಗೆ ಸಂವಹನವಾಗಿ ಇಂಗ್ಲಿಷ್ ಕೌಶಲ್ಯವನ್ನು ಬೋಧಿಸಲು ಬಳಸಲಾಗುತ್ತಿದೆ.
ನಾಗರೀಕ ಸೇವಾ ಪರೀಕ್ಷೆಗಳಿಗೆ ತರಬೇತಿ: ವಿದ್ಯಾರ್ಥಿಗಳು ನಾಗರೀಕ ಸೇವಾ ಪರೀಕ್ಷೆಗಳು ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಭಾಗವಹಿಸುವಂತೆ ಪ್ರೇರೇಪಿಸಲು ಅವರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಯಲ್ಲಿ ಅವರಿಗೆ ಶೈಕ್ಷಣಿಕ ಮಾರ್ಗದರ್ಶನ, ಆಪ್ತಸಲಹೆ ಹಾಗೂ ಕೌಶಲ್ಯಗಳ ತರಬೇತಿಯನ್ನು ನೀಡಲಾಗುತ್ತದೆ. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ: ವಿಶ್ವವಿದ್ಯಾಲಯವು ವಿದ್ಯಾರ್ಥಿಸ್ನೇಹಿ ಪರಿಸರವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಮೊದಲ ಆದ್ಯತೆಯ ಮೇಲೆ ಒದಗಿಸಿಕೊಡುತ್ತದೆ. ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಈ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. |
ಪಠ್ಯೇತರ ಚಟುವಟಿಕೆಗಳು:
ವಿಶ್ವವಿದ್ಯಾಲಯವು ಆವರಣದಲ್ಲಿ ವರ್ಷದ ಉದ್ದಕ್ಕೂ ಅರ್ಥಪೂರ್ಣವಾದ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಇದಕ್ಕಾಗಿ ಒಬ್ಬ ಶಿಕ್ಷಕ ಸಂಯೋಜಕರು ಹಾಗೂ ಎಲ್ಲಾ ಸ್ನಾತಕೋತ್ತರ ವಿಭಾಗಗಳಿಂದ ತಲಾ ಒಬ್ಬ ವಿದ್ಯಾರ್ಥಿ ಪ್ರತಿನಿಧಿಗಳಿರುವ ಪಠ್ಯೇತರ ಚಟುವಟಿಕೆಗಳ ಸಂಘವನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ವಿಶಿಷ್ಟವೂ ಆಕರ್ಷಕವಾದುದು ಎಲ್ಲಾ ಸ್ನಾತಕೋತ್ತರ ವಿಭಾಗಗಳು ಮತ್ತು ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವ ‘ಸಹ್ಯಾದ್ರಿ ಉತ್ಸವ’. ಇದರಲ್ಲಿ ನಡೆಯುವ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾಗುವವರನ್ನು ಆಯ್ಕೆ ಮಾಡಿ ಅಂತರ್ ವಿಶ್ವವಿದ್ಯಾಲಯ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಭಾಗವಹಿಸಲು ಕಳಿಸಿಕೊಡಲಾಗುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ವಿದ್ಯಾರ್ಥಿಗೆ ‘ನಿರಂಕುಶಮತಿ’ ಚಿನ್ನದ ಪದಕವನ್ನು ನೀಡಲಾಗುತ್ತದೆ.
ಆಸರೆ: 2011-12ರಿಂದ ಆರಂಭಗೊಂಡ ಈ ವಿಶಿಷ್ಟ ಯೋಜನೆಯಲ್ಲಿ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯಗಳನ್ನು ಅಭಿವೃದ್ಧಿಗೊಳಿಸುವ ತರಬೇತಿ ನೀಡಿ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. |
ಕ್ರೀಡೆಗಳು:
ಅತ್ಯುತ್ತಮ ಸೌಲಭ್ಯಗಳಿರುವ ಒಳಾಂಗಣ ಕ್ರೀಡಾಂಗಣವನ್ನು ವಿಶ್ವವಿದ್ಯಾಲಯ ಆವರಣದಲ್ಲಿ ಸ್ಥಾಪಿಸಲಾಗಿದೆ. ಇದರಲ್ಲಿ ವಾಲಿಬಾಲ್, ಬಾಸ್ಕೆಟ್ಬಾಲ್, ಜಿಮ್ನ್ಯಾಸ್ಟಿಕ್ಸ್ ಕ್ರೀಡೆಗಳ ಸೌಲಭ್ಯಗಳ ಜೊತೆಗೆ ಆಧುನಿಕವಾದ multigym ವ್ಯವಸ್ಥೆಯೂ ಲಭ್ಯವಿದೆ. ಈ ಸಮುಚ್ಛಯದಲ್ಲಿ 24 ವಸತಿ ಕೋಣೆಗಳು ಲಭ್ಯವಿದೆ.
ನಿಯಮಿತವಾಗಿ ಎಲ್ಲಾ ಕ್ರೀಡೆಗಳಲ್ಲಿ ಅಂತರ್-ಕಾಲೇಜು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ‘ವಿಶ್ವಮಾನವ’ ಚಿನ್ನದ ಪದಕವನ್ನು ನೀಡಲಾಗುತ್ತದೆ.
ವಿಶ್ವವಿದ್ಯಾಲಯ ಕ್ರೀಡಾ ವಿಭಾಗದಿಂದ ಹೊರಬಂದ ಅನೇಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ): ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಘಟಕವು ಕರ್ನಾಟಕ ರಾಜ್ಯದ ಅತ್ಯುತ್ತಮ ಘಟಕಗಳಲ್ಲಿ ಒಂದು ಎನ್ನುವ ಮನ್ನಣೆಯನ್ನು ಪಡೆದಿದ್ದು 2014-15ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಭಾಗವಹಿಸುವ ವಯಸ್ಕರ ಸಾಕ್ಷರತಾ ಕಾರ್ಯಕ್ರಮವನ್ನು ಈ ಘಟಕವು ತನ್ನ ಮೇಲುಸ್ತುವಾರಿಯಲ್ಲಿ ನಿರ್ವಹಿಸುತ್ತದೆ. ಎನ್.ಎಸ್.ಎಸ್. ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ‘ಅನಿಕೇತನ’ಚಿನ್ನದ ಪದಕವನ್ನು ನೀಡಲಾಗುತ್ತದೆ. ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳ ಕೇಂದ್ರಗಳು (SC/ST/OBC Cell): ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿಶೇಷವಾದ ಸೌಲಭ್ಯಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ವರ್ಗಗಳಿಗೆ ಸೇರಿದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಈ ಕೇಂದ್ರಗಳ ಮೂಲಕ ಶಿಷ್ಯವೇತನಗಳನ್ನು ಕೊಡಲಾಗುತ್ತದೆ. ಅಲ್ಲದೆ ವಿದ್ಯಾರ್ಥಿಗಳಿಗಾಗಿ ಪುನರ್ ಅಧ್ಯಯನ ತರಗತಿಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿಯನ್ನು ಆಯೋಜಿಸಲಾಗುತ್ತದೆ. ಆಂತರಿಕ ಗುಣಮಟ್ಟ ಖಾತ್ರಿ ಘಟಕ (IQAC): ಇದು ವಿಶ್ವವಿದ್ಯಾಲಯದಲ್ಲಿ ಬೋಧನೆ, ಸಂಶೋಧನೆ ಹಾಗೂ ಆಡಳಿತದಲ್ಲಿ ಗುಣಮಟ್ಟವನ್ನು ವೃದ್ಧಿಸುವ ಕಾರ್ಯಗಳನ್ನು ನಿರ್ವಹಿಸುತ್ತದೆ. |
ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳ ಕೇಂದ್ರ:
ವಿದೇಶಗಳಿಂದ ಅಧ್ಯಯನ ಹಾಗೂ ಸಂಶೋಧನೆಗಾಗಿ ಬರುವ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಈ ಕೇಂದ್ರವು ನಿರ್ವಹಿಸುತ್ತದೆ. ಅವರ ಶೈಕ್ಷಣಿಕ ಹಾಗೂ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ನಡೆಸಿ ಪ್ರವೇಶಾತಿಗೆ ಶಿಫಾರಸು ಮಾಡುವುದು ಇವೇ ಮುಂತಾದ ಕೆಲಸಗಳನ್ನು ಇದು ನಿರ್ವಹಿಸುತ್ತದೆ.
ಕೇಂದ್ರದ ನಿರ್ದೇಶಕರು ಪ್ರೊ. ರಿಯಾಜ್ ಮಹಮೂದ್ (ಸೆಲ್ ಸಂಖ್ಯೆ 00919448340841)
ಮಹಿಳಾ ಅಧ್ಯಯನ ಕೇಂದ್ರ: ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯರ ಸಬಲೀಕರಣಕ್ಕಾಗಿ ವಿವಿಧ ವಿಸ್ತರಣಾ ಕಾರ್ಯಕ್ರಮಗಳನ್ನು ಈ ಕೇಂದ್ರವು ಆಯೋಜಿಸುತ್ತದೆ. ಅದು ವಿದ್ಯಾರ್ಥಿನಿಯರಿಗೆ ಸಹಾಯವನ್ನು ಒದಗಿಸುವ, ಆಪ್ತ ಸಲಹೆ ಕಾರ್ಯಕ್ರಮಗಳನ್ನು ಯೋಜಿಸುವ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ತರಬೇತಿಯನ್ನು ನೀಡುವ ಮತ್ತು ವಿಶ್ವವಿದ್ಯಾಲಯದ ಎಲ್ಲಾ ಘಟಕಗಳಲ್ಲಿ ಲಿಂಗಸಮಾನತೆ ಮತ್ತು ಲಿಂಗತ್ವ ಸೂಕ್ಷ್ಮತೆಯನ್ನು ಬೆಳೆಸುವ ಮೂಲಕ ಸೌಹಾರ್ಧತೆಯುಳ್ಳ ಪರಿಪೂರ್ಣ ಲಿಂಗತ್ವವನ್ನು ಬೆಂಬಲಿಸುವ ಕಾರ್ಯಕ್ರಮಗಳನ್ನು ನಿರ್ವಹಿಸುವ ಅಧಿಕಾರವನ್ನು ಹೊಂದಿದೆ. ಲಿಂಗತ್ವ ಅಧ್ಯಯನಕ್ಕೆ ಸಂಬಂಧಿಸಿದ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನೂ ಈ ಕೇಂದ್ರಕ್ಕೆ ಕೊಡಲಾಗಿದೆ. |
ಲೈಂಗಿಕ ಕಿರುಕುಳ ಪರಿಹಾರ ಘಟಕ (Cell):
ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗಾಗಿ ಲೈಂಗಿಕ ಕಿರುಕುಳ ಪರಿಹಾರ ಘಟಕವನ್ನು ಪ್ರತ್ಯೇಕ ಹಾಗೂ ಶಾಶ್ವತವಾಗಿ ಸ್ಥಾಪಿಸಲಾಗಿದೆ.
Online ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಘಟಕ (Cell): ವಿದ್ಯಾರ್ಥಿಗಳ ಕುಂದುಕೊರತೆಗಳು ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡಲು ಸಮರ್ಪಕವಾದ ವ್ಯವಸ್ಥೆಯನ್ನು ರೂಪಿಸುವುದಕ್ಕಾಗಿ ಈ ಘಟಕವನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಸಂಪೂರ್ಣವಾದ ಪಾರದರ್ಶಕತೆಯನ್ನು ಕಾಪಾಡುವ ಹಾಗೂ ಯಾವುದೇ ಅಕ್ರಮಗಳು ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಇದನ್ನು ವ್ಯವಸ್ಥೆಗೊಳಿಸಲಾಗಿದೆ. ವಿಶ್ವವಿದ್ಯಾಲಯ ಅಥವಾ ಸಂಯೋಜಿತ ಕಾಲೇಜುಗಳ ಯಾವುದೇ ವಿದ್ಯಾರ್ಥಿಯು “Online Students Grievance Redressal Portal of UGC” (Website : www.ugc.ac.in) ಮೂಲಕ ತನ್ನ ದೂರನ್ನು ನೊಂದಾಯಿಸಬಹುದಾಗಿದೆ. ಪ್ರವೇಶಾತಿ ಪ್ರಕ್ರಿಯೆ, ಅಪಾರದರ್ಶಕ ಅಥವಾ uಟಿಜಿಚಿiಡಿ ಮೌಲ್ಯಮಾಪನ, ವಿದ್ಯಾರ್ಥಿ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಅಸಮರ್ಪಕತೆ ಅಥವಾ ವಿದ್ಯಾರ್ಥಿಗಳಲ್ಲಿ ತಾರತಮ್ಯದ ಆರೋಪಿತ ನಡವಳಿಕೆ ಇವುಗಳಿಗೆ ಸಂಬಂಧಿಸಿದ ದೂರುಗಳನ್ನು ನೊಂದಾಯಿಸಬಹುದಾಗಿದೆ. ದಿವ್ಯಾಂಗ ವಿದ್ಯಾರ್ಥಿಗಳ ಅಭಿವೃದ್ಧಿ ಘಟಕ : Disability Centre : ಯಾವುದೇ ಬಗೆಯ ದೈಹಿಕ ಅಥವಾ ಮಾನಸಿಕ ಅಸಾಮಥ್ರ್ಯವಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಅವರಿಗೆ ಲಭ್ಯವಿರುವ ಧನಸಹಾಯ ಹಾಗೂ ಶಿಷ್ಯವೇತನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಉದ್ಯೋಗ ಮಾಹಿತಿ ಹಾಗೂ ಮಾರ್ಗದರ್ಶನ ಕೇಂದ್ರ (Bureau): ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಉದ್ಯೋಗ ಸಂಬಂಧಿ ಅವಶ್ಯಕತೆಗಳನ್ನು ಈಡೇರಿಸುವ ಉದ್ದೇಶದಿಂದ ಆವರಣದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಸರಕಾರದಿಂದ ನೇಮಕಗೊಂಡ ಉಪಮುಖ್ಯಾಧಿಕಾರಿ ಹಾಗೂ ಓರ್ವ ಹಿರಿಯ ಶಿಕ್ಷಕರ ಉಸ್ತುವಾರಿಯಲ್ಲಿ ಈ ಘಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ 542 ಗ್ರಂಥಗಳಿವೆ. ಈ ಘಟಕವು ಉಚಿತ ತರಬೇತಿ, ತರಗತಿಗಳನ್ನು, ಶೈಕ್ಷಣಿಕ ಹಾಗೂ ಉದ್ಯೋಗ ಸಲಹಾ ಸೇವೆಗಳನ್ನು ಯೋಜಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ನಿರಂತರವಾದ ಔದ್ಯೋಗಿಕ ಹಾಗೂ ಶೈಕ್ಷಣಿಕ ಯೋಜನೆಗಳ ಬಗ್ಗೆ ಸಲಹೆಯನ್ನು ನೀಡುತ್ತದೆ, ಅಲ್ಲದೇ ಇದೇ ಬಗೆಯ ಇತರ ಚಟುವಟಿಕೆಗಳ ಜೊತೆಗೆ ಸಂಯೋಜನೆಯನ್ನು ಹೊಂದಿರುತ್ತದೆ. ಉದ್ಯೋಗ ನಿಯೋಜನೆ ಘಟಕ (Placement Cell) : ವಿಶ್ವವಿದ್ಯಾಲಯದ ಬಹುತೇಕ ಸ್ನಾತಕೋತ್ತರ ವಿಭಾಗಗಳು ಕ್ಯಾಂಪಸ್ ಸಂದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುತ್ತಿವೆ. ಜೊತೆಗೆ ಈ ಕಾರ್ಯವನ್ನು ಸಮಗ್ರವಾಗಿ ನಿರ್ವಹಿಸಲು ಪ್ರತ್ಯೇಕವಾದ Placement Cell ಅನ್ನು ರಚಿಸಲಾಗಿದೆ. ಇದು ವಿದ್ಯಾರ್ಥಿಗಳಿಗಾಗಿ ಉದ್ಯೋಗಾವಕಾಶ ಸೇವೆಗಳನ್ನು ನಿಯಮಿತವಾಗಿ ಒದಗಿಸಿಕೊಡುತ್ತದೆ. ವಿದ್ಯಾರ್ಥಿ ಸಲಹಾ ಕೇಂದ್ರ: ಶೈಕ್ಷಣಿಕ ಸಲಹೆಯೂ ಒಳಗೊಂಡಂತೆ ಹಲವು ಸ್ತರಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸಲಹೆಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತ್ಯೇಕ ಆಪ್ತಸಲಹಾ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಕಲಿಕೆಯೊಂದಿಗೆ ಗಳಿಕೆ ಯೋಜನೆ (Earn and Learn Scheme): ವಿದ್ಯಾರ್ಥಿಗಳ ಹಣಕಾಸು ಅವಶ್ಯಕತೆಗಳಿಗೆ ಬೆಂಬಲವಾಗುವಂತೆ ಈ ಯೋಜನೆಯನ್ನು ಅಳವಡಿಸಲಾಗಿದೆ. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮೂಲ ಕೆಲಸಗಳಲ್ಲಿ ಭಾಗಿಯಾಗಿ ಅದಕ್ಕೆ ಸಂಭಾವನೆ ಪಡೆಯುತ್ತಾರೆ. |
ಆರೋಗ್ಯ ಕೇಂದ್ರ:
ತಜ್ಞವೈದ್ಯರು ಹಾಗೂ ಅವಶ್ಯಕ ಸಿಬ್ಬಂದಿಯನ್ನು ಹೊಂದಿರುವ ಹಾಗೂ ಆಧುನಿಕ ಉಪಕರಣಗಳನ್ನು, ಸೌಲಭ್ಯಗಳನ್ನು ಹೊಂದಿರುವ ಆರೋಗ್ಯ ಕೇಂದ್ರವು ವಿಶ್ವವಿದ್ಯಾಲಯದ ಆವರಣದಲ್ಲಿದೆ. ಇಲ್ಲಿ ಪ್ರಾಥಮಿಕ ತಪಾಸಣೆಯ ಜೊತೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದ ಜೊತೆಗೆ Online ECG ಮತ್ತು ವೈದ್ಯಕೀಯ ಸಲಹೆಯ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅಲ್ಲದೆ ತುರ್ತು ಸಂದರ್ಭಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆಯೂ ಲಭ್ಯವಿದೆ.
Wi-Fi ವ್ಯವಸ್ಥಿತ ಆವರಣ: ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರು ಮತ್ತು ಸಂಶೋಧಕರಿಗೆ Wi-Fi ಆಂತರಿಕ ನೆಟ್ವರ್ಕ್ನ ಸೌಲಭ್ಯವನ್ನು ಇಡೀ ಆವರಣದಲ್ಲಿ ಒದಗಿಸಿಕೊಡಲಾಗಿದೆ. CCTV ನಿಯಂತ್ರಿತ ಭದ್ರತಾ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದ ಆವರಣವನ್ನು ಸಮಗ್ರವಾಗಿ CCTV ನಿಯಂತ್ರಣಕ್ಕೆ ತರಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ವಿಶ್ವವಿದ್ಯಾಲಯದ ಆಸ್ತಿ-ಪಾಸ್ತಿಗಳಿಗೆ ಸಂಪೂರ್ಣ ಭದ್ರತೆಯನ್ನು ನೀಡಲು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. |
ಬ್ಯಾಂಕ್ ಮತ್ತು ಕೆಫೆಟೇರಿಯಾ :
ವಿಶ್ವವಿದ್ಯಾಲಯದ ಆವರಣದಲ್ಲಿ ಸುಸಜ್ಜಿತವಾದ ಕ್ಯಾಂಟೀನ್ ವ್ಯವಸ್ಥೆ ಇದ್ದು, ಇಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಡುವವರಿಗೆ ಅವಶ್ಯಕವಾದ ವ್ಯವಸ್ಥೆಗಳಿವೆ. ವಿದ್ಯಾರ್ಥಿ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ನೀಡಲು ನಿರ್ಮಿಸಲಾದ ವಿದ್ಯಾರ್ಥಿ ಸೌಲಭ್ಯ ಸಮುಚ್ಛಯದ ಪ್ರತ್ಯೇಕ ಕಟ್ಟಡದಲ್ಲಿ ಕ್ಯಾಂಟೀನ್, ಬ್ಯಾಂಕ್, ಪುಸ್ತಕಾಲಯ, ವಿವಿಧ ಘಟಕಗಳು ಇವೆಲ್ಲವುಗಳು ಇವೆ. ATM ಸೌಲಭ್ಯವುಳ್ಳ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆವರಣದಲ್ಲಿದೆ.
ನಗರ ಕಛೇರಿ: ಶಿವಮೊಗ್ಗ ನಗರದಲ್ಲಿ ಸಹ್ಯಾದ್ರಿ ಕಾಲೇಜುಗಳ ಹತ್ತಿರದಲ್ಲಿ ಬಿ.ಎಚ್. ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ವಿಶ್ವವಿದ್ಯಾಲಯದ ನಗರ ಕಚೇರಿಯನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಅವಶ್ಯಕವಾದ ವಲಸೆ ಪ್ರಮಾಪತ್ರ, ತಾತ್ಕಾಲಿಕ ಪದವಿ ಪ್ರಮಾಣಪತ್ರಗಳು ಮತ್ತು ಇತರ ಶೈಕ್ಷಣಿಕ ಹಾಗೂ ಪರೀಕ್ಷಾ ಸಂಬಂಧಿ ದಾಖಲೆಗಳನ್ನು ಈ ಕಚೇರಿಯಿಂದಲೂ ವಿತರಿಸಲಾಗುತ್ತದೆ. ಅತಿಥಿಗೃಹ: ವಿಶ್ವವಿದ್ಯಾಲಯದ ಅತಿಥಿಗೃಹವು ಆಕರ್ಷಕವಾದ ತಾಣದಲ್ಲಿ ನಿರ್ಮಿತವಾಗಿದೆ. ಭದ್ರಾ ಜಲಾಶಯದ ಹಿನ್ನೀರಿನ ಸುಂದರ ದೃಶ್ಯವು ಕಾಣುವ ಎತ್ತರದ ದಿನ್ನೆಯ ಮೇಲೆ ಇರುವ ಅತಿಥಿಗೃಹದಿಂದ ಇಡೀ ಭದ್ರಾ ಜಲಾಶಯ ಯೋಜನೆಯ ವಿಸ್ತೀರ್ಣವನ್ನು ಕಾಣಬಹುದಾಗಿದೆ. ಅತಿಥಿಗೃಹದಲ್ಲಿ ಹವಾನಿಯಂತ್ರಿತ ಕೊಠಡಿಗಳೂ ಸೇರಿದಂತೆ, ಉತ್ತಮ ಊಟೋಪಚಾರ ವ್ಯವಸ್ಥೆಯೂ ಇದೆ. ಅತಿಥಿಗೃಹಕ್ಕೆ ಹೊಂದಿಕೊಂಡಂತೆಯೆ ವಿಶೇಷವಾದ Lake View Guest House ಕೂಡ ಇದೆ. |